![](https://blogger.googleusercontent.com/img/b/R29vZ2xl/AVvXsEicsJ7SMZlBXv2T3nxEIn9MKTBQvafa8wrLmFepPJH1il7AzjNAU-FtrkX1Af9k58-jhgCG9AiK782oBTKSEdQDfFOg8ZevyQx1N5cS8tBeL-YplS8vpOMuhIhxwtFUMNyaBYCdE8eqDoav/s200/11825078_510962959069666_1083413822952096277_n+%25281%2529.jpg)
ಕಂದನಾಗಿ ಬಂದಿಹ ಯಾದವರಾಯ
ಕುಂದುಗಳನೆಂದಿಗೂ ಎಣಿಸದಿರಯ್ಯ
ಬಂದಿಹೆ ನಿನ್ನಯ ಶರಣಕ್ಕಿಂದು
ಭವ ಬಂಧನಗಳ ನೀ ಬಿಡಿಸಯ್ಯ... ||
ಅರಿಗಳ ಭಯದಲಿ ಬಲು ನೊಂದೆನಯ್ಯ
ಹರಿಯೇ ಎನ್ನ ಸಂಗ ನೀ ಬಿಡಲಯ್ಯ
ತುರುಗಳ ಕಾಯುವ ಗೊಲ್ಲ ನೀನಯ್ಯ
ಕರುಗಳ ಮಂದೆಯಲ್ಲಿ ನಾ ಇಹೆನಯ್ಯ... ||
ಲೌಕಿಕ ವಿಷಯಕ್ಕೆ ಮನ ಹಿಗ್ಗುವುದಯ್ಯ
ಲವಲೇಶವಾದರೂ ಭಕುತಿ ಇರಿಸಯ್ಯ
ಲೋಕಾನಂದನೆ ನಿನ್ನ ಕರುಣೆ ಬಹಳಯ್ಯ
ಲೋಪವಾದರೆ ಎನ್ನ ನೀ ಕಾಯಬೇಕಯ್ಯ... ||
ಸಂಚಿತ ಹೊರೆಯನು ಹೊತ್ತಿಹೆನಯ್ಯ
ಪ್ರಾಪಂಚಿಕ ತೊಡಕಲಿ ಸಿಲುಕಿಹೆನಯ್ಯ
ಅಂಜಿಕೆ ತುಂಬಿದ ಮನ ನನ್ನದಯ್ಯ
ಕಂಜನಾಭ ಪೊರೆಯೈ ಅನಂತಶಯನಯ್ಯ...||
https://soundcloud.com/shyamalarao/7lbzhtkst0pg
ಚಿ ತ್ರ ಕೃ ಪೆ : ಅಂ ತ ರ್ಜಾ ಲ
ಭಕ್ತಿ ತುಂಬಿದ ಗೀತೆಯಿಂದ ಮನಸ್ಸಿಗೆ ಸಂತೋಷವಾಯಿತು.
ReplyDeleteDhanyavaadagalu Sunath sir..c
ReplyDelete