ಕರಿವರದ ಗಿರಿರಾಯ ಕರುಣಾಳು
ಎನ್ನೊಡೆಯ
ಕರವ ಮುಗಿವೆನೊ ಪ್ರಭುವೆ ವೇಂಕಟರಾಯ || ಪ ||
ಹರಿಕಾರ ಈ ಜೀವ ನಿನ್ನಡಿಗೆ
ಮುಡಿಪಿಡುತ
ಚರಣಕ್ಕೆ ಪೊಡಮುಡುವೆ ಕಾಪಾಡು
ಜೀಯಾ || ಅ.ಪ ||
ಬೆಟ್ಟದಾಪುರ ದೊರೆಯೆ ದಿಟ್ಟ
ನಿಲುವಲಿ ನಿಂತು
ಪಟ್ಟ ಮಹಿಷಿಯ ನೀನು ಕೆಳಗೆ
ಬಿಟ್ಟೆ |
ಕಂಗೆಟ್ಟು ಕಳವಳದಿ ಬರುತಿರ್ಪ
ಭಕುತರಿಗೆ
ಇಷ್ಟಾರ್ಥಗಳ ಕೊಟ್ಟು ಸಲಹುತಿರುವೆ
|| ೧ ||
ಬಾಂದಳವ ತುಂಬಿಸಿದ ಅಸದಳದ
ಕಾರುಣ್ಯ
ಭೂತಳದ ನಾಡೊಳಗೆ ಪಸರಿಸಿರುವೆ
|
ಸಪ್ತಪರ್ವತವಾಸಿ ಆಪ್ತವಾಗಿದೆ
ಬದುಕು
ತೃಪ್ತವಾಗಿಹ ತನುವ ಅರ್ಪಿಸುತಿರುವೆ || ೨ ||
ಅನುಗಾಲ ಅನುರಾಗ ಅಲೆಗಳಲಿ
ತೇಲಿಸುತ
ಜನನಿಯಂದದಿ ಎನ್ನ ಪೊರೆಯುತಿರುವೆ
|
ಮನದೊಳಗೆ ಮನವಾಗಿ ಆನಂದಮಯನಾಗಿ
ಅನಂತಶಯನನೆ ಮನವ ಮುದಗೊಳಿಸುತಿರುವೆ
|| ೩ ||
http://soundcloud.com
ತುಂಬಾ ಸೊಗಸಾದ ಭಕ್ತಿಗೀತೆ....ಎಲ್ಲಾ ಸಾಲುಗಳು ಚೆನ್ನಾಗಿವೆ....ಜೊತೆಗೆ ಆಡಿಯೋ ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು.....ಕೇಳಿ ಆನಂದಿಸಿದೆ......ಅಭಿನಂದನೆಗಳು......
ReplyDeleteನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಅಶೋಕ್.
Deleteಭಕ್ತಿಭಾವವನ್ನು ಉಕ್ಕಿಸುವ ಮಧುರ ಗೀತೆ.
ReplyDeleteಪ್ರಾಸಬದ್ಧವಾದ ಭಕ್ತಿಗೀತೆ ಕೇಳಲು ಸೊಗಸಾಗಿದೆ
ReplyDeleteನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಮ೦ಜುಳ ಅವರೆ.
Deleteಧನ್ಯವಾದಗಳು ಸುನಾತ್ ಸರ್.
ReplyDeleteಅತ್ಯುತ್ತಮ!
ReplyDeleteಧನ್ಯವಾದಗಳು ಸರ್...
ಪ್ರಶ೦ಸೆಯ ನುಡಿಗಳಿಗೆ ಧನ್ಯವಾದಗಳು ಪ್ರಕಾಶ್ ಸರ್.
Deleteತುಂಬಾ ಚೆನ್ನಾಗಿದೆ. 'ಮನದೊಳಗೆ ಮನವಾಗಿ ಆನಂದಮಯನಾಗಿ'
ReplyDeleteತುಂಬಾ ಇಷ್ಟ ಆಯ್ತು
ಇಷ್ಟಪಟ್ಟು ಬರೆದು ತಿಳಿಸಿದ ಸ್ವಣ೯ ಅವರಿಗೆ ಧನ್ಯವಾದಗಳು.
Deleteಸೊಗಸಾದ ಭಕ್ತಿಗೀತೆ.
ReplyDeleteananth sir sundara
ReplyDeletebhaktigeetegaagi dhanyavaadagalu.
This comment has been removed by the author.
ReplyDelete