ಬಡಿವಾರದ ಗಿಣಿ ಸಿಂಗಾರದ ಮಣಿ
ಬಂಗಾರದ ಬಳೆ ತರಲೇ ?
ಬಡಾಯಿ ಬಾಯಿಯ ಕಿಲಾಡಿ ಮಾತಿನ
ಹುಡುಗನೇ ನೀನೊಬ್ಬ ತರಲೆ ..೧
ಛಾತಿಯ ತೋರುವ ಮಾತಿನ ಮಲ್ಲಿಯೆ
ಮುತ್ತಿನ ಮೂಗುತಿ ತರಲೇ ?
ಸುತ್ತಣ ಬೀದಿಯ ಗಸ್ತು ತಿರುಗುವವ
ಹುಡುಗನೇ ನೀನೊಬ್ಬ ತರಲೆ..೨
ಬಳ್ಳಿಯ ನಡುವಿನ ಹೃದಯದ ಕಳ್ಳಿಯೆ
ಬೆಳ್ಳಿಯ ಡಾಬನು ತರಲೇ?
ಮರುಳು ಮಾತಿನಲಿ ಮೋಡಿ ಮಾಡುವವ
ಹುಡುಗನೇ ನೀನೊಬ್ಬ ತರಲೆ..೩
ಬಾಂದಣದೊಳಗಿನ ಚುಕ್ಕಿಗಳನೆಲ್ಲ
ಬಾಚಿ ಬೊಗಸೆಯಲಿ ತರಲೇ ?
ಬಾನಿನ ಅಂಚದು ಮಾವಿನ ಮರವಲ್ಲ
ಹುಡುಗನೇ ನೀನೊಬ್ಬ ತರಲೆ..೪
ಸುಂದರ ನಾರಿಯೆ ಅಂದದ ಪೋರಿಯೆ
ಮನ ಮಂದಿರಕೆ ನೀನೆಂದು ಬರುವೆ ?
ಚಂದ ಮಾತಿನಲಿ ಮುದವನು ತಂದಿಹ
ಹುಡುಗನೇ ನಾ ಅಲ್ಲಿಯೇ ಇರುವೆ..೫
ಚಿತ್ರಕೃಪೆ : ಅಂತರ್ಜಾಲ
ಮಸ್ತ! ಮಸ್ತ! ಅನಂತರಾಜರೆ, ಬಹಳ ಸೊಗಸಾಗಿ ಕವನ ಪೋಣಿಸಿ ಕೊಟ್ಟಿದ್ದೀರಿ.
ReplyDeleteಓದಿ, ಹಾಡಿ, ನಕ್ಕು ನಲಿದೆ.
ha ha chennagide sir ...
ReplyDeleteಸರ್..
ReplyDeleteತು೦ಬಾ ಚನ್ನಾಗಿ ತರಲೆ ಮಾಡಿದ್ದೀರಿ...:):)
ಸರ್, ತು೦ಬಾ ಚನ್ನಾಗಿದೆ.
ReplyDeletemastaagide sir kavana... ahaha
ReplyDelete@ಸುನಾತ್ ಸರ್ - ತಮ್ಮ ಮನಸಿಗೆ ಕವನ ಮುದ ನೀಡಿದ್ದರೆ ನಾ ಧನ್ಯ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಅನ೦ತ್
ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಜ್ಯೋತಿಬೆಳಗಿಬರಲಿ ತಾಣದ ಆಶಾ ಅವರಿಗೆ ಧನ್ಯವಾದಗಳು.
ReplyDeleteಅನ೦ತ್
@ವಿಜಯಶ್ರೀ - ಒ೦ದು ಕಾಲದಲ್ಲಿ ಮನಕ್ಕೆ ಮುದ ನೀಡುವ೦ತಹ "ತರಲೆ" ಗಳು ನಡೆಯುತ್ತಿದ್ದವು ಅಲ್ಲವೆ? ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ReplyDeleteಅನ೦ತ್
@ಚ೦ದ್ರು ಸರ್ - ಮೆಚ್ಚಿ ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.
ReplyDeleteಅನ೦ತ್
ಕವನ ಮಸ್ತಾಗಿದೆ ಎ೦ದು ಮೆಚ್ಚಿ ಪ್ರತಿಕ್ರಿಯಿಸಿದ ಮನಸು ತಾಣದವರಿಗೆ ಧನ್ಯವಾದಗಳು.
ReplyDeleteಅನ೦ತ್
kavana chennaagide..
ReplyDeleteಸರ್,
ReplyDeleteತರಲೆ ಕವನ ತುಂಬಾ ಚೆನ್ನಾಗಿದೆ..
ತರಲೆ ಮಾಡಲೂ ಶುರುವಿಟ್ಟಿರಲ್ಲ ಚೆನ್ನಾಗಿದೆ ನಿಮ್ಮ ’ತರಲೆ’, ಧನ್ಯವಾದಗಳು
ReplyDelete@ ಮನಮುಕ್ತಾ - ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡ೦.
ReplyDeleteಅನ೦ತ್
@ಶಿವು - ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆ ಧನ್ಯವಾದಗಳು.
ReplyDeleteಅನ೦ತ್
@ ವಿ ಆರ್ ಭಟ್ - ಹಳೆಯದನ್ನು ನೆನಪಿಸಿಕೊ೦ಡದ್ದು ಸರ್. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಅನ೦ತ್
sir ಕವನ ಚೆನ್ನಾಗಿದೆ....
ReplyDeleteThis comment has been removed by the author.
ReplyDeleteಹೀ...... ಸಕತ್ತಾಗಿದೆ ಸಂವಾದ... ತರಲೆ ಹುಡುಗನಿಗೆ.. ತಕ್ಕ ಉತ್ತರಗಳು. ನಿಜಕ್ಕೂ ಒಂದು ಆಸಕ್ತಿಕರ ಸಂವಾದ ಅನಂತ್ ಸಾರ್.. ನಿಮ್ಮ ಕವನಗಳನ್ನು ಓದುವಾಗ ನನಗೆ ಆ ಸನ್ನಿವೇಶಗಳು ಕಣ್ಮುಂದೆ ಬಂದಂತಾಗಿ ಬಿಡುತ್ತೆ. ಅದು ಬಹುಶ: ನಿಮ್ಮ ಶೈಲಿಯ ಪ್ರಭಾವ ಅನ್ಕೋತೀನಿ. ಭಿನ್ನವಾದ ಭಾವ..ತುಂಬಾ ಇಷ್ಟವಾಯಿತು :-)... ಧನ್ಯವಾದಗಳು.
ReplyDeleteಶ್ಯಾಮಲ
ananth raaj ravare,tarale tarle tumbaa.. sogasaagide kavana.dhanyavaadagalu.
ReplyDeleteಕವನ ಮೆಚ್ಚಿ ಬರೆದು ತಿಳಿಸಿದ ಶಶಿ ಜೋಯ್ಸ್ ಅವರಿಗೆ ಧನ್ಯವಾದಗಳು.
ReplyDeleteಅನ೦ತ್
@ ಶ್ಯಾಮಲಾ - ಸ೦ವಾದ ಶೈಲಿಯ ಕವನವು ಇಷ್ಟವಾಯಿತು ಎ೦ದು ಬರೆದು ತಿಳಿಸಿದ್ದೀರಿ. ಚಿಕ್ಕ೦ದಿನಲ್ಲಿ.. ಶಾಲಾ ವಾರ್ಷಿಕೋತ್ಸವ ಸಮಾರ೦ಭಗಳಲ್ಲಿ ಈ ಶೈಲಿಯ ಗೀತ-ನೃತ್ಯಗಳನ್ನು ನೋಡಿದ ನೆನಪು. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನಾನು ಅಭಾರಿ. ಧನ್ಯವಾದಗಳು.
ReplyDeleteಅನ೦ತ್
@ ಕಲಾವತಿ ಮೇಡ೦ - ತರಲೆ ತು೦ಬಾ ಸೊಗಸಾಗಿದೆ ಎ೦ದು ಬರೆದು ತಿಳಿಸಿದ್ದೀರಿ. ಧನ್ಯವಾದಗಳು.
ReplyDeleteಅನ೦ತ್
ಸ೦ವಾದ ಶೈಲಿಯ ಕವನವು ಇಷ್ಟವಾಯಿತು
ReplyDelete@ ಸೀತಾರಾ೦ ಸರ್ - ಸ೦ವಾದ ಶೈಲಿಯು ತಮಗೆ ಇಷ್ಟವಾಯಿತೆ೦ದು ಬರೆದು ತಿಳಿಸಿದ್ದೀರಿ. ಧನ್ಯವಾದಗಳು.
ReplyDeleteಅನ೦ತ್
ಅನಂತ್ ಸರ್,
ReplyDeleteಸುಂದರ ಕವನ...ಮನಸ್ಸಿಗೆ ಮುದ ಕೊಡುವ , ಮತ್ತೆ ಮತ್ತೆ ಓದಬೇಕೆನ್ನಿಸುವ ಸೊಗಸಾದ ಕವನ...ಧನ್ಯವಾದಗಳು .....
@ ಅಶೋಕ್ ಸರ್ - ತಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು. ಕವನದ ಸಾರ್ಥಕತೆ ಓದುಗರಿಗೆ ಮನ ಮುಟ್ಟುವಲ್ಲಿ, ಮುದ ಕೊಡುವಲ್ಲಿ ಅಡಗಿದೆ.
ReplyDeleteಶುಭಾಶಯಗಳು
ಅನ೦ತ್