ಕರುಣೆಯ ಬೇಡುವೆ ಕರುಣಾಮಯಿಯೇ
ಚರಣಕ್ಕೆರಗುವೆ ವಾರಿಜ ಪಾಣಿಯೇ |
ನಿರುತವು ನೆನೆಯಲು ಶರಣರ ಪೊರೆಯುವೆ
ಭುವನದ ಒಡತಿಯೆ ಶಾಂಭವಿ ನಮಿಪೆ ||
ಮಾಯೆಯು ತುಂಬಿದ ಈ ಧರೆಯಲ್ಲಿ
ದೈನ್ಯತೆ ಬದುಕಿನ ಕಣಕಣದಲ್ಲಿ |
ಜನನಿಯೆ ಎರಗುವೆ ಪದತಲದಲ್ಲಿ
ಭುವನದ ಒಡತಿಯೆ ಶಾಂಭವಿ ನಮಿಪೆ || ೧ ||
ಜಂಜಡ ಜೀವನ ಪಥದಲಿ ನಡೆಯುವ
ಮದಡರ ಜಡತೆಯ ನೀಗು ಮೃಡಾಣಿಯೇ |
ಚಂಡ ಪ್ರಚಂಡರ ತಮವನು ಹರಿಸಿದ
ಭುವನದ ಒಡತಿಯೆ ಶಾಂಭವಿ ನಮಿಪೆ || ೨ ||
ಅಂತರಂಗದಾ ಅರಿಗಳ ಶೋಧಿಸು
ಸಂತತ ಸಾತ್ವಿಕ ಧಾರೆಯ ಹರಿಸು |
ಅನಂತ ಶಯನನ ಭಕ್ತೆ ನಾರಾಯಣಿ
ಭುವನದ ಒಡತಿಯೆ ಶಾಂಭವಿ ನಮಿಪೆ || ೩ ||
ಹಾಡು ಕೇಳಲು : http://soundcloud.com/shyamalarao/karunaamayee
ಚಿತ್ರಕೃಪೆ : ಅಂತರ್ಜಾಲ
ಜಗನ್ಮಾತೆಯ ಕೃಪೆ ಬೇಡುವ ಕವನ ಚೆನ್ನಾಗಿದೆ.
ReplyDeleteಅನಂತರಾಜರೆ,
ReplyDeleteನವರಾತ್ರಿಯ ಈ ಶುಭಕಾಲದಲ್ಲಿ ತಾಯಿ ದುರ್ಗೆಯ ಕೃಪೆಯ ಕೋರುವ ನಿಮ್ಮ ಗೀತೆ ತುಂಬ ಸೊಗಸಾಗಿ, ಭಕ್ತಿಪೂರ್ಣವಾಗಿ ಬಂದಿದೆ.
ಸುಂದರ ಗೀತೆ, ಚಿತ್ರವೂ ಚೆನ್ನಾಗಿದೆ
ReplyDeleteSuper sir...Ishta aitu
ReplyDeleteananta sir chandada
ReplyDeletebhaktigeetegaagi dhanyavaadagalu.