ಸ್ಮರಣೆಯ ಮಾಡಲು ಅಳಲನು ಆಲಿಸಿ
ನೋವಿನ ಪಥದಲಿ ನಲಿವನು ಬೆಳಗುವ
ರಾಯರೆ ನಿಮ್ಮಯ ಪದತಲಕೆರಗುವೆ || ೧ ||
ಬಾಲನ ಪೊರೆಯುವ ಪಾಲಕ ಪರಿಯಲಿ
ದೀನನ ಮೊರೆಯನು ತಂದೆ ನೀ ಕೇಳುವೆ
ಕಾಲ ಕಷ್ಟಗಳ ದಾಟಿಸಿ ನಡೆಸುವ
ರಾಯರೆ ನಿಮ್ಮಯ ಪದತಲಕೆರಗುವೆ || ೨ ||
ಜೀವನ ಎಂಬುವ ಕಾನನ ತಿರುಗುತ
ಜೀವವು ಬಳಲಿದೆ ಆಸರೆ ಬೇಡಿದೆ
ನೊಂದಿಹ ಮನದಲಿ ನಿಮ್ಮದೇ ಜಪವಿದೆ
ರಾಯರೆ ನಿಮ್ಮಯ ಪದತಲಕೆರಗುವೆ || ೩ ||
ಸಂಚಿತ ಭಯವನು ಸಂತತ ಹರಿಸುವ
ಚಿಂತಿತ ಭಾವಕೆ ಅಭಯವ ನೀಡುವ
ಅನಂತ ಶಯನನ ನಿರುತ ಧ್ಯಾನಿಸುವ
ರಾಯರೆ ನಿಮ್ಮಯ ಪದತಲಕೆರಗುವೆ || ೪ ||
http://soundcloud.com/shyamalarao/karuneya-20kadalu
ಚಿತ್ರಕೃಪೆ : ಅಂತರ್ಜಾಲ
ರಾಯರ ಆರಾಧನೆ ಇದೀಗ ಮುಗಿದಿದೆ. ನಿಮ್ಮ ಗೀತೆಯು ಅವರ ಕರುಣೆಯನ್ನು ಪ್ರತಿಫಲಿಸುತ್ತಿದೆ. ನಿಮ್ಮೊಡನೆ ನಾನೂ ಹೇಳುವೆ:ರಾಯರೆ ನಿಮ್ಮಯ ಪದತಲಕೆರುಗುವೆ.
ReplyDeleteDhanyavadagalu Sunath Sir..:)
DeleteRAYARA PADATALAKKE NAMO NAMAHA. NAMAGELLA BEKAADA ISTHARTHAGALANNU KARUNISUVA KALIYUGADA KAMADHENU SHREE RAGHAVENDRA MAHA SWAMIGALIGE SHIRASASHTANGA NAMANAGALU.
ReplyDelete